ಭಾಗ - 19

Posted on October 31st, 2007 in ಹೊಸಕಥೆ, ಕಟ್ಟು ಕಥೆ by sritri

ಶಾಸ್ತ್ರಿಗಳ ವೈಕುಂಠ ಸಮಾರಾಧನೆಗೆಂದು ಹಳ್ಳಿಗೆ ಬಂದಿದ್ದ ರಾಜೀವನ ತಾಯಿ ಇಂದಿರಮ್ಮ ಬೀಗಿತ್ತಿಯನ್ನು ಸಮಾಧಾನ ಪಡಿಸುವುದರಲ್ಲಿ ಒಂದಿಷ್ಟು ಯಶಸ್ವಿ ಯಾಗಿದ್ದರು ರಾಜೀವನ ತಂಗಿ ಕವಿತಾಳೂ ಮನೆಯಲ್ಲಿ ಓಡಾಡಿಕೊಂಡು ಅದೂ ಇದೂ ಕೆಲಸ ಮಾಡಿಕೊಂಡು ಇದ್ದಳು ಈ ಕಾರಣಕ್ಕಾಗಿಯೇ ಅವರು ವಾಪಸ್ಸು ಹೊರಟಾಗ ಆಕಾಶ ಅವ್ರನ್ನು ಇನ್ನೊಂದಷ್ಟು ದಿನ ಹಳ್ಳಿಯಲ್ಲೇ ಇರುವಂತೆ ಹೇಳಿ ಬಲವಂತವಾಗಿ ಒಪ್ಪಿಸಿದ. ಕವಿತಾಗೆ ಇದರಿಂದ ಖುಷಿಯಾಯಿತುಅವಳು ಕದ್ದು ಕದ್ದೂ ಭರತನನ್ನು ನೋಡುತ್ತಿರುವುದು ಯಾರ ಗಮನಕ್ಕೂ ಬಂದಂತಿಲ್ಲ…ಆದರೆ ಭರತ ನ ಕಣ್ಣು ಮೂಗೂ ತಲೆ ಎಲ್ಲಾ ಚುರುಕು…ಪ್ರವಲ್ಲಿಕಾ ಬಿಳಿ ಪಾರಿವಾಳ….ಕವಿತಾ ಜಿಂಕೆ ಕಣ್ಣಿನ ಜೇನಿನ ದನಿಯ ಚದುರೆ… ಭರತ ಗೊಂದಲದಲ್ಲಿ ಬಿದ್ದ.

ಹಳ್ಳಿಯ ಪಂಡಿತರು ಕೊಡುತ್ತಿರುವ ಹಸಿರು ಔಷಧಿಯಿಂದ ಹ್ಯಾರಿಯ ಆರೋಗ್ಯಕೊಂಚ ಕೊಂಚವಾಗಿ ಸುಧಾರಿಸುತ್ತಿದೆ ಮೊದಲೇ ಭಾರತೀಯ ಪರಿಸರಕ್ಕೆ ಅಪರಿಚಿತಳಾದ ಜೆನಿಗೆ ಅವಳು ಈ ಮನೆಗೆ ಬಂದ ಮೇಲೆ ಓತಪ್ರೇತವಾಗಿ ನಡೆದು ಹೋದ ಘಟನೆಗಳಿಂದ ಗಲಿಬಿಲಿಗೊಂಡಿರುವಾಗ ನೆಮ್ಮದಿ ತಂದಿರುವುದು ಮಗನ ಆರೋಗ್ಯ ಸುಧಾರಿಸುತ್ತಿರುವ ಸಂಗತಿ. ಜೆನಿಗೆ ಮಡಿ ಹುಡಿ ಗೊತ್ತಿಲ್ಲ, ಶಾರದಮ್ಮನವರಿಗೆ ಇಂಗ್ಲಿಷ್ ಬರುವುದಿಲ್ಲ. ಪ್ರವಲ್ಲಿಕಾಗೆ ತನ್ನದೇ ಪ್ರಪಂಚ ಅದರಲ್ಲಿ ಅವಳು ಭರತ ಇಬ್ಬರೇ…ಧಾರಿಣಿಗೆ ಇನ್ನೂ ಅಪ್ಪನನ್ನು ಮರೆಯಲಾಗುತ್ತಿಲ್ಲ…ಅಕಾಶ ವಾಪಸ್ಸು ಬೆಂಗಳೂರಿಗೆ ಹೋಗಿಯಾಗಿದೆ. ಒಂಟಿಯಾಗಿ ಕಂಗೆಟ್ಟು ಕೂತಿದ್ದ ಜೆನಿಗೆ ಆಸರೆಯಾಗಿ ತಂಪೆರೆದವಳು ಕವಿತಾ.

***

ಅಮೆರಿಕದ ಎಲ್ಲ ವಾಣಿಜ್ಯಪತ್ರಿಕೆಗಳ ಮುಖಪುಟದಲ್ಲಿ ಅಂದು ರಾರಾಜಿಸುತ್ತಿದ್ದ ತಲೆಬರಹವೆಂದರೆಃ “Fox swallows Galaxy”. ಇವೆರಡೂ ಅಮೇರಿಕದ ಅತಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು. ಒಂದನ್ನೊಂದು ನುಂಗಲು ಇವೆರಡರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ Galaxyಯನ್ನು ನುಂಗುವದರಲ್ಲಿ Fox ಯಶಸ್ವಿಯಾಯಿತು. ವ್ಯವಹಾರ ಹಸ್ತಾಂತರದ ಮೊದಲು, Galaxy ತಾನು ಒಳನಾಡು ಹಾಗು ಹೊರನಾಡುಗಳಲ್ಲಿ ನಡೆಯಿಸುತ್ತಿದ್ದ ತನ್ನೆಲ್ಲ ಕುಟಿಲ ಕಾರಸ್ಥಾನಗಳನ್ನು ತಕ್ಷಣವೇ ನಿಲ್ಲಿಸಿ ಬಿಟ್ಟಿತು. ಇದರ ಪರಿಣಾಮವೆಂದರೆ, ಜೊಯಿ ಮತ್ತು ಟಿಮ್ ಇವರು Operation Bangaloreಗೆ ಮಂಗಳ ಹಾಡಿದ್ದು. ಶಶಾಂಕ ನಿಟ್ಟುಸಿರು ಬಿಟ್ಟು, ಧಾರಿಣಿಗೆ ಈ ಸಿಹಿ ಸುದ್ದಿ ತಿಳಿಸಿದ. ಧಾರಿಣಿ, ಪ್ರವಲ್ಲಿಕಾ, ರಾಜೀವ, ಶಾರದಮ್ಮ ಮತ್ತೆಲ್ಲರೂ ಖುಷಿಯಾದರು. ಶಾಸ್ತ್ರಿಗಳ ಮರಣದಿಂದ ಶೋಕಗ್ರಸ್ತವಾದ ಆ ಮನೆಯಲ್ಲಿ ಮತ್ತೆ ನೆಮ್ಮದಿಯ ವಾತಾವರಣ ನೆಲೆಸಿತು. ಪ್ರವಲ್ಲಿಕಾಳಿಗೂ ಸಹ ತನ್ನ ಹಾಗೂ ಭರತನ ಪ್ರಣಯವನ್ನು ಬೇಗನೇ ಪರಿಣಯದಲ್ಲಿ ಮುಗಿಸಲು ಇದು ಒಳ್ಳೆಯ ಕಾಲವೆನಿಸಿತು. ಆದರೆ! ಆದರೆ…

ರಸಿಕ - ಮಳೆ ಹಿಡಕೊಂತ

Posted on October 31st, 2007 in ಹಂಸ್, ಹಾಡು ಹಬ್ಬ by sritri

ಚಿತ್ರ: ರಸಿಕ
ಸಾಹಿತ್ಯ, ಸಂಗೀತ : ಹಂಸಲೇಖ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಹಾಡು ಕೇಳಿ

ಚಿಟಪಟ ಚಿಟಪಟ ಚಿಟಪಟ ಅಂತ
ಹಿಡುಕೊಂತ ಮಳೆಯು ಹಿಡುಕೊಂತ

ಅತ್ತ ಜೋರಾಗೂ ಬರದು
ಇತ್ತ ಸುಮ್ಮನೂ ಇರದು
ಸ್ನಾನ ಆದಂಗೂ ಇರದು
ಧ್ಯಾನ ಮಾಡೋಕೂ ಬಿಡದು

ನೆನೆಯುವ ಜೀವಾನ ನೆನೆಸುವ ಈ ಸೋನೆ
ಬಯಸಿದ ಆಸೇನಾ ಬರಿಸುವ ಈ ಸೋನೆ

ಬೇಡ ಅನ್ನೋಕೂ ಬಿಡದು
ಬೇಕು ಅನ್ನೋಕೂ ಬಿಡದು

ಮಳೆಯಲ್ಲಿ ಮಗುವಾಗಿ ಜಿಗಿಯುವ ಈ ಜಾಣೆ
ನೆನೆದರೆ ಶೃತಿಯಲ್ಲಿ ನುಡಿಯುವ ನರವೀಣೆ

ಮುದ್ದು ಮಾಡೋಕೂ ಬಿಡದು
ಜಿಡ್ಡು ಹೋಗೋಕೂ ಬಿಡದು

ಗುಡುಗುಡು ತಾನ ಮುಗಿಲೊಳಗೆ
ಧಿರನನ ಧಿರನನ ಧಿರನನ
ಢವ ಢವ ಗಾನ ಎದೆಯೊಳಗೆ
ಧಿರನನ ಧಿರನನ ಧಿರನನ ||

ಸ್ವರಗಳ ಮಳೆಯಲ್ಲಿ ಕಾಲಕೆ ಸನ್ಮಾನ
ಒಲವಿನ ಮಳೆಯಲ್ಲಿ ಹೃದಯಕೆ ಸನ್ಮಾನ
ಅತ್ತ ಸಂಗೀತ ಶರಣು ಇತ್ತ ಪ್ರಾಯಾನೂ ಶರಣು

ಕಡಲಿಗೆ ಕಾಲಿಲ್ಲ ನವಿಲಿಗೆ ನಾಡಿಲ್ಲ
ಮನಸಿಗೆ ಮಾತಿಲ್ಲ ಪ್ರೀತಿಗೆ ಬರವಿಲ್ಲ
ಮಳೆಯು ನಮ್ಮನ್ನು ಬಿಡದು
ನಾವು ಪ್ರೀತಿನ ಬಿಡೆವು

ಥಕ ಥಕ ಮಿಂಚು ಮಳೆಯೊಳಗೆ
ಧಿರನನ ಧಿರನನ ಧಿರನನ
ಮಿಕ ಮಿಕ ಸಂಚು ಕಣ್ಣೊಳಗೆ
ಧಿರನನ ಧಿರನನ ಧಿರನನ ||

           ***

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

Posted on October 31st, 2007 in ಹಳೆಯದಿದು ಹೊನ್ನು! by sritri

ಚಿತ್ರ : ಕಣ್ತೆರೆದು ನೋಡು
ಸಾಹಿತ್ಯ : ಜಿ.ವಿ.ಅಯ್ಯರ್
ಸಂಗೀತ : ಜಿ.ಕೆ. ವೆಂಕಟೇಶ್
ಗಾಯಕ : ಜಿ.ಕೆ. ವೆಂಕಟೇಶ್

ಹಾಡು ಕೇಳಿ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದೆವೆನ್ನಿ
ಗೆಳೆತನದ ವರದ ಹಸ್ತ ನೀಡಿಬನ್ನಿ
ಮೊಳೆತಿರುವ ಭೇದಗಳ ಬಿಟ್ಟು ಬನ್ನಿ||

ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚಬನ್ನಿ||

ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರ
ಗತವೈಭವ ಕಾಣುವಾ|
ನವಶಕ್ತಿಯ ತುಂಬುವ ಭುವನೇಶ್ವರಿ ನೀಡುವ
ಸಂದೇಶವ ಸಾರುವಾ||

Next Page »